ಸೋಮವಾರ, ಮಾರ್ಚ್ 10, 2014

Mahila Dinacharane 8.3.14

ಸಮುದಾಯ ಶಿವಮೊಗ್ಗ (ರಿ)
ನಂ.90, ಸುರಭಿ, ಕೋಟೆ ಅಂಚೆ ಕಛೇರಿ ರಸ್ತೆ, ಶಿವಮೊಗ್ಗ.

ಪತ್ರಿಕಾ ವರದಿ:
ವಿಷಯ: ಸಮುದಾಯ ಶಿವಮೊಗ್ಗದಿಂದ ಮಹಿಳಾ ದಿನಾಚರಣೆ.
ದಿನಾಂಕ 8.3.2014 ರಂದು ಮಲ್ಲೇಶ್ವರ ನಗರದ ಶ್ರೀಮತಿ ಕೆ.ಎಸ್.ನಾಗರತ್ನ ಕೊಡಕ್ಕಲ್ ಶಿವಪ್ರಸಾದರ ಮನೆಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಹೆಚ್. ನಾಗವೇಣಿ ಯವರ 'ಗಾಂಧಿ ಬಂದ' ಕೃತಿಯ ಪರಿಚಯ ಹಾಗೂ ವಿಶೇಷ ಮಹಿಳಾ ಸಾಧಕರಾದ  ಶ್ರೀಮತಿ ಕೆ.ಎಸ್. ನಾಗರತ್ನ ಇವರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. 'ಗಾಂಧಿ ಬಂದ' ಕೃತಿಯ ಬಗ್ಗೆ ಮಾತನಾಡಿದ ಉಪನ್ಯಾಸಕರಾದ ಹೆಚ್.ಟಿ. ಕೃಷ್ಣಮೂತರ್ಿ ಯವರು ಇತ್ತೀಚಿನ ಮಹಿಳಾ ಸಾಹಿತಿಗಳಲ್ಲಿ ನಾಗವೇಣಿ ತಮ್ಮ ಧೈರ್ಯ, ಸೂಕ್ಷತೆ, ಹಾಗೂ ಸಾಮಾಜಿಕ ಕಳಕಳಿಯಿಂದಾಗಿ  ಅಭಿನಂದನಾರ್ಹರು ಎಂದು ತಿಳಿಸಿದರು. ನಾಗವೇಣಿಯವರು ಕನರ್ಾಟಕದ ಕರಾವಳಿಯ ಸೂಕ್ಷತೆಗಳನ್ನೆಲ್ಲ ತಮ್ಮ 'ಗಾಂಧಿ ಬಂದ' ಹಾಗೂ ತಮ್ಮ ಇತರ ಕೃತಿಗಳಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ ಎಂಬುದನ್ನು ವಿವರಿಸಿದರು.ಅನೇಕ ತಿಂಡಿ ತಿನಿಸುಗಳ ತಯಾರಿಕೆಯ ಸೊಗಸನ್ನು ವಿವರಿಸುತ್ತಾ ಅದನ್ನು ಪಡೆಯುವಾಗಿನ ಕೆಳೆವರ್ಗದ ದೈನ್ಯತೆಯ ಪ್ರಸಂಗವನ್ನು ತರುವುದು ನಾಗವೇಣಿಯವರ ವೈಶಿಷ್ಟ್ಯ.  ಕರಾವಳಿಯಲ್ಲಿ ಜಾತಿ ಜಾತಿ ಹಾಗೂ ಜಾತಿ ಮತಗಳ ನಡುವೆ ಇದ್ದ ಸೌಹಾರ್ದ ಕ್ರಮೇಣ ದ್ವೇಷ, ಹಿಂಸೆಗಳಾಗಿ ಬದಲಾಗುತ್ತಿರುವುದನ್ನು ನಾಗವೇಣಿಯವರು ವಿಷಾದದಿಂದ ತಮ್ಮ ಕೃತಿಗಳಲ್ಲಿ ಎತ್ತಿ ತೋರಿಸುವುದರಷ್ಟಕ್ಕೇ ಸೀಮಿತವಾಗದೆ, ಕರಾವಳಿಯಲ್ಲಿ ನಡೆಯುತ್ತಿರುವ ಸಾಮಾಜಿಕ ಹೋರಾಟಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಮಹಿಳಾ ದಿನಾಚರಣೆಯಂದು ಜೀವ ವಿಮಾ ನಿಗಮದ ಉದ್ಯೋಗಿಯಾದ ಶ್ರೀಮತಿ ಕೆ.ಎಸ್.ನಾಗರತ್ನ ಅವರು ವಿಶೇಷ ಶಕ್ತಿಯ ಮಹಿಳೆ. ಇವರನ್ನು  ಸನ್ಮಾನಿಸುವ ಮೂಲಕ ಶಿವಮೊಗ್ಗ ಸಮುದಾಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ ಎಂದು ಕಾರ್ಯದಶರ್ಿ ಶ್ರೀನಿವಾಸ ತಿಳಿಸಿದರು. ಅವರು ಸ್ಪೂತರ್ಿಯ ಚಿಲುಮೆ, ಉತ್ಸಾಹದ ಬುಗ್ಗೆ. ಅವರು ತಮ್ಮ ಜೀವನೋತ್ಸಾಹದಿಂದಾಗಿ ನಮಗೆಲ್ಲ ಆದರ್ಶಪ್ರಾಯವಾಗಿದ್ದಾರೆ ಎಂದು ಭಾಗವಹಿಸಿದ್ದ ಸದಸ್ಯರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಜಿ.ವೆಂಕಟೇಶ್ ವಹಿಸಿದ್ದರು.  ಕಾರ್ಯದಶರ್ಿ ಶ್ರೀನಿವಾಸ ಸ್ವಾಗತಿಸಿದರು ಹಾಗೂ ಖಚಾಂಚಿ ಕೆ.ಲಕ್ಷ್ಮೀನಾರಾಯಣ ರಾವ್ ವಂದಿಸಿದರು.
ವರದಿ:
ಕಾರ್ಯದಶರ್ಿ, ಸಮುದಾಯ ಶಿವಮೊಗ್ಗ(ರಿ)
 08182-22018





ಶನಿವಾರ, ಫೆಬ್ರವರಿ 1, 2014

ರಾಷ್ಟ್ರಕವಿ ಜಿ.ಎಸ್.ಎಸ್. ಸ್ಮರಣೆ.

ದಿನಾಂಕ 1.2.2014 ರಂದು ನಡೆದ ಸಮುದಾಯ ಶಿವಮೊಗ್ಗದ ಮಾಸದ ಕಾರ್ಯಕ್ರಮ-2.
ರಾಷ್ಟ್ರಕವಿ ಜಿ.ಎಸ್.ಎಸ್. ಸ್ಮರಣೆ.
ಹಾಡುಗಳನ್ನು ಹಾಡಿದವರು ಶ್ರೀಮತಿ ಲತಾ , ಶ್ರೀಮತಿ ಮಮತಾ, ಶ್ರೀಮತಿ ರೇಖಾ, ಹಾಗು ಶ್ರೀ ಕುಮಾರಸ್ವಾಮಿ. ಕವಿಯ ಜೀವನ ಮತ್ತು ಸಾಧನೆ ಬಗ್ಗೆ ಕಿರು ಪರಿಚಯ ಹಾಗು ಕವನ ವಾಚನ ಮಾಡಿದವರು ಶ್ರೀಮತಿ ನಾಗರತ್ನ .






ಮಾಸದ ಕಾರ್ಯಕ್ರಮ-೨

ಸಮುದಾಯ ಶಿವಮೊಗ್ಗ(ರಿ)
ಮಾಸದ ಕಾರ್ಯಕ್ರಮ-೨
ರಾಷ್ಟ್ರಕವಿ ಜಿ.ಎಸ್.ಎಸ್ ಹಾಡುಗಳ ಕಾರ್ಯಕ್ರಮ
ದಿನಾಂಕ:೧.೨.೨೦೧೪ ಶನಿವಾರ ಸಂಜೆ; ೪.೩೦ಕ್ಕೆ
ಸ್ಠಳ: ಅಧ್ಯಕ್ಷರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿ ಯವರ ಮನೆ
ವಿವೇಕಾನಂದ ಬಡಾವಣೆ. ಶಿವಮೊಗ್ಗ.

ಭಾನುವಾರ, ಜನವರಿ 5, 2014

ಮಾಸದ ಕಾರ್ಯಕ್ರಮ 1: ಜನವರಿ 2014

ಮಾಸದ ಕಾರ್ಯಕ್ರಮ 1:ಜನವರಿ 2014

Yesterday · 
ಕಲ್ಕುಳಿ ವಿಠ್ಠಲ್ ಹೆಗ್ಗಡೆ ಅವರ ಮಂಗನ ಬ್ಯಾಟೆ ಪುಸ್ತಕದ ಕತೆ ಹೇಳಿದವರು: ಪ್ರೋ:ಕೇ.ಜಿ.ವೆಂಕಟೇಶ್
ಸ್ಥಳ :ವಿ.ಶ್ರೀನಿವಾಸ್ ನಾಗರತ್ನ ಅವರ ಮನೆ.



ಭಾನುವಾರ, ಅಕ್ಟೋಬರ್ 27, 2013

ಕೃತಿ ಪರಿಚಯ \\ ನಾಟಕ

ಸಮುದಾಯ ಶಿವಮೊಗ್ಗ (ರಿ)
ಪ್ರಸನ್ನ ಅವರ ಹೊಸ ಕೃತಿ
"ದೇಸಿ ಆಹಾರ ಪದ್ಧತಿ"
ಕುರಿತು ಒಂದು ವಿಚಾರ ವಿಮರ್ಶೆ
ಕೃತಿ ಪರಿಚಯ:
ಶ್ರೀ ಡಿ.ಎಸ್.ಮಂಜುನಾಥ್
(ಉಪನ್ಯಾಸಕರು, ಕಮಲ ನೆಹರು ಕಾಲೇಜು, ಶಿವಮೊಗ್ಗ.)
ಭಾಗವಹಿಸುವಿಕೆ: ಡಾ| ಎಚ್.ಎಸ್. ನಾಗಭೂಷಣ್, ಶ್ರೀ. ಎಚ್.ಟಿ. ಕೃಷ್ಣಮೂರ್ತಿ, ಶ್ರೀ. ಎಂ. ವೆಂಕಟೇಶ್, ಶ್ರೀ. ಟಿ.ಅವಿನಾಶ್, ನಾವು ಮತ್ತು ನೀವು.

ದಿನಾಂಕ: 1-11-2013 ನೇ ಶುಕ್ರವಾರ, ಸಂಜೆ 5.30ಕ್ಕೆ. ಸ್ಥಳ: ಡಿ.ವಿ.ಎಸ್. ರಂಗಮಂದಿರ, ಶಿವಮೊಗ್ಗ. 

ಇದೇ ದಿನ ಸಂಜೆ 6.45 ರಿಂದ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ "ಯುವ ಸೌರಭ" ಕಾರ್ಯಕ್ರಮದಡಿ 
ಡಿ.ವಿ.ಎಸ್. ವಿದ್ಯಾರ್ಥಿಗಳು ಅಭಿನಯಿಸಿರುವ ನಾಟಕ
"ಬೆಪ್ಪು ತಕ್ಕಡಿ"
(ರಚನೆ: ಚಂದ್ರಶೇಖರ ಕಂಬಾರ)
ನಿರ್ದೇಶನ: ಅಜಯ್ ಗೌಡ
ಸರ್ವರಿಗೂ ಸ್ವಾಗತ

ಕಾರ್ಯದರ್ಶಿ,
ಸಮುದಾಯ ಶಿವಮೊಗ್ಗ (ರಿ)

ಗುರುವಾರ, ಜುಲೈ 4, 2013

ನಮ್ಮ ರಾಬರ್ಟ್ ಕ್ಲೈವ್

ಸಮುದಾಯ ಶಿವಮೊಗ್ಗ ಅರ್ಪಿಸುವ 
ಸಮುದಾಯ ಬೆಂಗಳೂರು ಅಭಿನಯದ ನಾಟಕ 
ನಮ್ಮ ರಾಬರ್ಟ್ ಕ್ಲೈವ್ 
ನಿರ್ದೇಶನ: ಪ್ರಕಾಶ್ ಬೆಳವಾಡಿ 

ಸ್ಥಳ: ಕು.ವೆಂ.ಪು. ರಂಗಮಂದಿರ 
ದಿನಾಂಕ:೧ ೩ . ೭ . ೨ ೦ ೧ ೩
ಶನಿವಾರ ಸಂಜೆ ೬.
೪ ೫ ಕ್ಕೆ. 
ದಯಮಾಡಿ ಬನ್ನಿ .






ಭಾನುವಾರ, ಫೆಬ್ರವರಿ 10, 2013

ದಿನಾಂಕ ೦೯.೦೨.೨೦೧೩ ರಂದು ಶಿವಮೊಗ್ಗದ ಕು.ವೆಂ.ಪು ರಂಗ ಮಂದಿರದಲ್ಲಿ ನಡೆದ "ಹಕ್ಕಿಗೊಂದು ಗೂಡು ಕೊಡಿ" ನಾಟಕದ ದೃಶ್ಯ.