ಶನಿವಾರ, ಮಾರ್ಚ್ 27, 2010

ವಿಶ್ವ ರಂಗಭೂಮಿ ದಿನಾಚರಣೆ-2010


 ಮಾರ್ಚ್ ೨೭, ೨೦೧೦ ರಂದು   ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಶಿವಮೊಗ್ಗ ನಗರದ ವಿವಿಧ ರಂಗ ತಂಡಗಳು, ಒಗ್ಗೂಡಿ ರಂಗ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. ವಿವಿಧ ವೇಷ ಭೂಷಣಗಳೊಂದಿಗೆ ಕಲಾವಿದರು ನಡೆಸಿದ ಜಾಥಾ ಜನರನ್ನು ಆಕರ್ಷಿಸಿತು. ಕುವೆಂಪು ರಂಗ ಮಂದಿರದಲ್ಲಿ ಈ ವರ್ಷದ ರಂಗ ಸಂದೇಶ ಓದುವುದರೊಂದಿಗೆ ಕೊನೆಗೊಂಡಿತು.
ಸಮುದಾಯ ಶಿವಮೊಗ್ಗದ ತಂಡ ಕೂಡ ಈ ಜಾಥಾದಲ್ಲಿ ಭಾಗವಹಿಸಿತ್ತು.

ಮಂಗಳವಾರ, ಮಾರ್ಚ್ 23, 2010

ಭಗತ್ ಸಿಂಗ್ ಹುತಾತ್ಮರಾಗಿ ೭೯ ವರ್ಷಗಳು.


ಶಹೀದ್ ಭಗತ್ ಸಿಂಗ್ ಹುತಾತ್ಮರಾದ ದಿನದ ನೆನಪಿನ ಕಾರ್ಯಕ್ರಮ ಸಮುದಾಯ ಶಿವಮೊಗ್ಗದ ಕಾರ್ಯದರ್ಶಿ ಸಂಗಾತಿ ಲಕ್ಷ್ಮಿ ನಾರಾಯಣ್ ರವರ ಮನೆಯಲ್ಲಿ ದಿನಾಂಕ ೨೩.೦೩.೨೦೧೦ ರಂದು ನಡೆಯಿತು.

ಶನಿವಾರ, ಮಾರ್ಚ್ 20, 2010

ವೈದೇಹಿ ಅವರಿಗೆ ಸನ್ಮಾನ


ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಲೇಖಕಿ ವೈದೇಹಿ ಅವರಿಗೆ ಸನ್ಮಾನ
ಸಮುದಾಯ ಶಿವಮೊಗ್ಗದ ಸದಸ್ಯರಿಂದ
ಸ್ಥಳ: ಕರ್ನಾಟಕ ಸಂಘ, ಶಿವಮೊಗ್ಗ.
ದಿನಾಂಕ: ೨೦.೦೩.೨೦೧೦



ಮಂಗಳವಾರ, ಮಾರ್ಚ್ 9, 2010

ನಾಟಕ : ರೆಕ್ಕೆ ಕಟ್ಟುವಿರಾ



 ಸಮುದಾಯ ಶಿವಮೊಗ್ಗ (ರಿ) 

ಅರ್ಪಿಸುವ ನಾಟಕ
 ರೆಕ್ಕೆ ಕಟ್ಟುವಿರಾ 
ರಚನೆ: ಶ್ರೀ ಬಿ.ಸುರೇಶ್
(ಚಲನ ಚಿತ್ರ, ಟಿ.ವಿ.ಧಾರವಾಹಿ ನಿರ್ದೇಶಕ ಹಾಗೂ ನಟ)
 ನಿರ್ದೇಶನ: ಡಾ. ಶ್ರೀಪಾದ್ ಭಟ್ 
ದಿನಾಂಕ ೧೭.೦೩.೨೦೧೦. ಬುಧವಾರ ಸಂಜೆ ೬.೪೫ ಕ್ಕೆ.
ಸ್ಥಳ: ಕು.ವೆಂ.ಪು. ರಂಗ ಮಂದಿರ. ಶಿವಮೊಗ್ಗ.
ಪ್ರವೇಶ ಉಚಿತ.  ದಯಮಾಡಿ ಬನ್ನಿ.
------
-ಕೆ.ಲಕ್ಷ್ಮಿ ನಾರಾಯಣ ರಾವ್, ಕಾರ್ಯದರ್ಶಿ, ಸಮುದಾಯ ಶಿವಮೊಗ್ಗ.